ಭಾರತದಲ್ಲಿ ವಿಪತ್ತು ಸಂಭವಿಸಿದಾಗ ಎಚ್ಚರಿಸುವ ಅಲರ್ಟ್ ಮೆಸೇಜ್ ನೀಡಲು ಇಂದಿನಿಂದ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಭಾರತದಲ್ಲಿ ತ್ವರಿತಗತಿಯಲ್ಲಿ ಜನರನ್ನು ಎಚ್ಚರಿಸುವ ಏಕ ಮಾತ್ರ ಸಾಧನ ಮೊಬೈಲ್ ಗಳಾಗಿವೆ. ಭಾರತದಲ್ಲಿ 120 ಕೋಟಿ ಮೊಬೈಲ್ ಬಳಕೆದಾರರಿದ್ದಾರೆ. ಈ ಪೈಕಿ 60 ಲಕ್ಷ ಜನ ಸ್ಮಾರ್ಟ್ ಪೋನಗಳನ್ನು ಬಳಕೆ ಮಾಡುತ್ತಿದ್ದಾರೆ. ವಿಪತ್ತು ಸಂಭವಿಸಿದಾಗ ದ್ವನಿಯ ಜೊತೆ ಮೊಬೈಲ್ ಕಂಪನವಾಗುತ್ತದೆ. ಕಂಪನವಾಗುವ ಸಂಧರ್ಭದಲ್ಲಿ ಮೊಬೈಲ್ ನಲ್ಲಿ ಸಂದೇಶಗಳು ಬರುತ್ತವೆ. ಘಟನೆಗಳು ಸಂಭವಿಸಿದಾಗ ತುರ್ತು ಎಚ್ಚರಿಕೆ ಕೊಟ್ಟು, ತೆಗೆದುಕೊಳ್ಳಬಹುದಾದ ಮುನ್ನೇಚ್ಚರಿಕೆ ಕ್ರಮಗಳ ಬಗ್ಗೆ ಸಂದೇಶ ನೀಡಲಿದೆ.
ಎಲ್ಲರ ಮೊಬೈಲ್ ಗಳಿಗೂ ಎರಡೆರಡು ಬಾರಿ ಈ ಸಂದೇಶಗಳು ಬರುತ್ತಿದ್ದು, ಯಾರು ಸಹ ಆತಂಕ ಪಡುವ ಅವಶ್ಯಕತೆ ಇಲ್ಲ.
Author: Karnataka Files
Post Views: 1





