ಈ ದೇಶದಲ್ಲಿ ಮತ್ತೆಂದೂ ಮೋದಿ ಸರ್ಕಾರ ಬರಲ್ಲ. ಇಂಡಿಯಾ ಒಕ್ಕೂಟ ಬಲಶಾಲಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು 75 ವರ್ಷದ ಇತಿಹಾಸದಲ್ಲಿ ಕಾಂಗ್ರೇಸ್ ಪಕ್ಷಕ್ಕೆ 600 ಕೋಟಿ ದೇಣಿಗೆ ಹಣ ಶೇಖರಣೆಯಾಗಿಲ್ಲ. ಆದರೆ ಕೇವಲ 9 ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ 8500 ಕೋಟಿ ಹಣ ದೇಣಿಗೆ ಬಂದಿದೆ ಎಂದು ಆರೋಪಿಸಿದರು. ಕೊರೋನಾ ಸಂದರ್ಭದಲ್ಲಿ ಪಿ ಎಮ್ ಕೇರ್ ಫಂಡಗೆ 30 ಸಾವಿರ ಕೋಟಿ ಹಣ ಬಂದಿದೆ. ಬಂದ ಹಣದಲ್ಲಿ ಬಿಜೆಪಿ ಕ್ರಿಕೇಟ್ ಸ್ಟೇಡಿಯಂ ಕಟ್ಟಲಾಗಿದೆ ಹೊರತು ಒಂದು ಆಸ್ಪತ್ರೆಯನ್ನು ಸಹ ಕಟ್ಟಿಲ್ಲ ಎಂದು ಲಾಡ್ ಆರೋಪಿಸಿದರು. ಜನತೆಗೆ ಎಲ್ಲವು ಗೊತ್ತಾಗಿದ್ದು, ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಸಿದ್ಧತೆ ಆರಂಭ ಮಾಡಿದೆ ಎಂದರು. ಇದೆ ವೇಳೆ ಬಿಜೆಪಿ ಸಾಹುಕಾರರ ಪಾರ್ಟಿಯಾಗಿದೆ ಎಂದರು. ದೇಶದ ಜನರಿಗೆ ಯಾರದು ಸಾಹುಕಾರರ ಪಾರ್ಟಿ, ಯಾರದು ಬಡವರ ಪಾರ್ಟಿ ಎಂದು ಗೊತ್ತಾಗಿದೆ ಎಂದರು.
Author: Karnataka Files
Post Views: 3





