ಹುಲಿ ಉಗುರು ಪ್ರಕರಣ ರಾಜ್ಯದಾಧ್ಯಂತ ಸದ್ದು ಮಾಡುತ್ತಿದೆ. ವರ್ತೂರು ಸಂತೋಷ ಬಂಧನದ ಬಳಿಕ, ರಾಜಕಾರಣಿಗಳು ಹಾಗೂ ಸಿಲೆಬ್ರೇಟಿಗಳ ಹತ್ತಿರ ಒಂದೊಂದಾಗಿ ಹುಲಿ ಉಗುರು ಲಾಕೆಟ್ ಪತ್ತೆಯಾಗುತ್ತಿವೆ. ಕೆಲವರು ತಾವು ಧರಿಸಿದ್ದ ಹುಲಿ ಉಗುರು ನಕಲಿ ಎಂದು ಹೇಳಿದರೆ, ಇನ್ನೂ ಕೆಲವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಸಧ್ಯ ಹುಲಿ ಉಗುರು ಪ್ರಕರಣವನ್ನು ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ಹುಲಿ ಉಗುರು ಪ್ರಕರಣದಲ್ಲಿ ಕೇವಲ ಹಿಂದುಗಳನ್ನೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿರುವ ಶಾಸಕ ಅರವಿಂದ ಬೆಲ್ಲದ, ದರ್ಗಾಗಳಲ್ಲಿ ನವಿಲುಗರಿಗಳು ಇವೆ. ಅಂತಹವರ ಮೇಲೆಯೂ ಕೇಸ್ ಹಾಕಿ ಮೌಲ್ವಿಗಳನ್ನು ಜೈಲಿಗೆ ಅಟ್ಟಿ ಎಂದು ಆಗ್ರಹಿಸಿದ್ದಾರೆ. ನಿಮ್ಮ ವನ್ಯಜೀವಿ ಕಾನೂನು ಎಲ್ಲರಿಗೂ ಒಂದೇ ನ್ಯಾಯ ಕೊಡಲಿ ಎಂದು ಆಗ್ರಹಿಸಿದ್ದಾರೆ.
Author: Karnataka Files
Post Views: 5





