ಹಿಂದುತ್ವದ ಸಮರ್ಥನೆ ಮತ್ತು ಹಿಂದುತ್ವದ ಬಗ್ಗೆ ಮಾತನಾಡುತ್ತಲೇ ಘರ್ಜಿಸುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಸ್ಥಿತಿಗೆ ಬಂದು ತಲುಪಿದ್ದಾರೆ. ಹೀಗಂತಾ ಅವರದೇ ಪಕ್ಷದ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.
ನಿನ್ನೇ ಮೊನ್ನೆಯವರೆಗೂ ರಾಜ್ಯ ಕಾಂಗ್ರೇಸ್ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಯತ್ನಾಳ ಇಂದು ತಮ್ಮದೇ ಪಕ್ಷದ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ. ಯಾವಾಗ ವಿಪಕ್ಷ ನಾಯಕನ ಸ್ಥಾನ ತಪ್ಪಿತೋ, ಅಲ್ಲಿಂದ ಅವರ ವರಸೆ ಬೇರೆಯಾಗಿದೆ.
ಬಸನಗೌಡ ಪಾಟೀಲ ಯತ್ನಾಳ ಸೇನೆ, ರಾಜ್ಯ ಬಿಜೆಪಿ ವಿರುದ್ದ ಹರಿಹಾಯ್ದಿದ್ದು,
# ಅಧಿಕಾರ ಬೇಕೆ….! ಸ್ವಾಭಿಮಾನ ಬಿಟ್ಟು ಬಕೆಟ್ ಹಿಡಿಯಿರಿ #
ಎಂದು ತಿರುಗೇಟು ನೀಡಿದೆ. ಆರ್, ಅಶೋಕ ಆಯ್ಕೆಗೆ ವ್ಯಂಗ್ಯವಾಡಿದ ಬಸನಗೌಡ ಪಾಟೀಲ ಯತ್ನಾಳ್ ಸೇನೆ, ಅಧಿಕಾರ ಸಿಗಲಿ ಬಿಡಲಿ ಯತ್ನಾಳರನ್ನು ಏನು ಮಾಡೋಕೆ ಆಗಲ್ಲ ಎಂದು ಎಚ್ಚರಿಸಿದೆ.
Author: Karnataka Files
Post Views: 3





