ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಮೂರು ಸಲ ಜಯದ ನಗೆ ಬೀರಿದ ಹ್ಯಾಟ್ರಿಕ್ ಹೀರೋ, ಪ್ರಸಾದ ಅಬ್ಬಯ್ಯ ಸ್ಲಮ್ ಬೋರ್ಡ ಅಧ್ಯಕ್ಷರಾಗುವದು ಖಚಿತವಾಗಿದೆ.
ನಿಗಮ ಮಂಡಳಿಗಳ ನೇಮಕದ ಪಟ್ಟಿ ಸಿದ್ದಗೊಂಡಿದ್ದು, ಮೊದಲ ಹಂತದಲ್ಲಿ ಹಿರಿಯ ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದೆ. ನಿಗಮ ಮಂಡಳಿಗೆ 25 ಶಾಸಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಕೊಪ್ಪಳದ ಶಾಸಕ ಹಿಟ್ನಾಳ್, ಶಿವಲಿಂಗೇಗೌಡರಿಗೆ ಅಧ್ಯಕ್ಷ ಸ್ಥಾನ ಸಿಗುವದು ಖಚಿತವಾಗಿದೆ.
ಪ್ರಸಾದ ಅಬ್ಬಯ್ಯ, ಭೂ ಸೇನಾ ನಿಗಮಕ್ಕೆ ಅಧ್ಯಕ್ಷರಾಗ್ತಾರೆ ಎಂದು ಹೇಳಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಅದಕ್ಕಿಂತಲೂ ಹೆಚ್ಚು ಮಹತ್ವ ಪಡೆದಿರುವ ಕೊಳಚೆ ನಿರ್ಮೂಲನ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ.
Author: Karnataka Files
Post Views: 5





