ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಧಾರವಾಡದಲ್ಲಿ ನಡೆದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದರು. ಚಂದ್ರಕಾಂತ ಬೆಲ್ಲದರನ್ನು ಅಭಿನಂದಿಸಿ ಮಾತನಾಡಿದ ಸಿದ್ದರಾಮಯ್ಯ, ಚಂದ್ರಕಾಂತ ಬೆಲ್ಲದ ಮತ್ತು ನಾನು ಗೋಕಾಕ ಚಳುವಳಿಯ ಒಡನಾಡಿಗಳು, ಚಂದ್ರಕಾಂತ ಬೆಲ್ಲದ ಅವರು ಎಲ್ಲ ಜಾತಿ ಧರ್ಮಗಳಾಚೆ ಪರಸ್ಪರ ಪ್ರೀತಿಸಿ, ಗೌರವಿಸುವ ಸಂಸ್ಕೃತಿ ಮೈಗೂಡಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಚಂದ್ರಕಾಂತ ಬೆಲ್ಲದ ಬಸವೇಶ್ವರರ ಹಾದಿಯಲ್ಲಿ ಹೊರಟ ಮನುಷ್ಯ, ಬೇರೆಯವರ ಮನಸ್ಸಿಗೆ ನೋವು ತರುವ ಹಾಗೆ ಯಾವಾಗಲೂ ಅವರು ಮಾತನಾಡಿಲ್ಲ ಎಂದ ಸಿದ್ದರಾಮಯ್ಯ, ಸಮಾರಂಭದಲ್ಲಿ ಅಲ್ಲಮ ಲೋಕ, ಬೆಲ್ಲದ ಅಚ್ಚು, ದೊಡ್ಡ ಹೊಳಿ ದಾಟಿದವರು ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
Author: Karnataka Files
Post Views: 4





