
ಚುನಾವಣೆವರೆಗೆ ಮಾತ್ರ ಬಿಜೆಪಿಯವರು, ಶ್ರೀರಾಮನ ಹೆಸರು ಬಳಕೆ ಮಾಡ್ತಾರೆ. ತದನಂತರ ಮತ್ತೆ ಬಿಜೆಪಿಯವರಿಗೆ ನೆನಪಾಗೋದು ಮತ್ತೊಂದು ಚುನಾವಣೆಗೆ ಎಂದು ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದ್ರು.
ಧಾರವಾಡದಲ್ಲಿ ಮಾತನಾಡಿದ ಅವರು, ಶ್ರೀರಾಮ ನನಗೆ ನಿನ್ನೆ ಕನಸಲ್ಲಿ ಬಂದಿದ್ರು. ಕನಸಲ್ಲಿ ಬಂದ ಶ್ರೀರಾಮರು ಬಿಜೆಪಿಯವರು ನನ್ನನ್ನು ಚುನಾವಣೆಗೆ ಬಳಕೆ ಮಾಡುತ್ತಿದ್ದಾರೆ ಅವರಿಗೆ ಸ್ವಲ್ಪ ಹೇಳು ಅಂದ್ರು ಎಂದು ಸಂತೋಷ ಲಾಡ್ ಹೇಳಿದರು.
ಬಿಜೆಪಿಯವರಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶ್ರೀರಾಮನ ನೆನಪಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು ಇದೊಂದು ಗಿಮಿಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
Author: Karnataka Files
Post Views: 4





