ನರೇಂದ್ರ ಮೋದಿ, ಮತ್ತೊಮ್ಮೆ ದಿಗ್ವಿಜಯ ಸಾಧಿಸಿ ಮೂರನೆ ಬಾರಿ, ಪ್ರಧಾನಮಂತ್ರಿ ಯಾಗಲೆಂದು ತಮಿಳುನಾಡಿನ ರಾಜಲಕ್ಷ್ಮಿ ಎಂಬ ಮಹಿಳೆ ಬುಲೆಟ್ ಸವಾರಿ ಕೈಗೊಂಡಿದ್ದಾಳೆ.
ಬುಲೆಟ್ ನಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿರುವ ಆಕೆ ಇಂದು ಧಾರವಾಡಕ್ಕೆ ಬರುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾದಿಂದ ಸ್ವಾಗತ ಕೋರಲಾಯಿತು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿರುವ ರಾಜಲಕ್ಷ್ಮಿಯನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾಜಿಮಹಾಪೌರ, ಈರೇಶ ಅಂಚಟಗೇರಿ,ಯುವಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ, ಅಮಿತ ಪಾಟೀಲ್ , ಪ್ರಮೋದ ಕಾರಕುನ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ, ವಿನಾಯಕ ಗೊಂಧಳಿ, ದೇವರಾಜ ಶಾಪುರ, ಸಂಕಲ್ಪ ಕಲ್ಯಾಣಶೆಟ್ಟಿ, ಮಹಿಳಾ ಪ್ರಮುಖರಾದ ಪುಷ್ಪ ನವಲಗುಂದ, ರೇಣುಕಾ ಕೊಳೆಕರ್, ಸುಮಿತ್ರಾ ಬಡಿಗೇರ್, ಮುಕ್ತಾ ವೆರಣೇಕರ್, ಅಭಿ ಹಾತರಕಿ, ಸಾಯಿನಾಥ ಚುರಮರಿ, ಶಶಾಂಕ್, ಪವನ್ ಗವಳಿ, ಶ್ರೀರಾಮ್ ,ಹಾಗು ಗುರುಹಿರಿಯರು ಯುವಕರು ಉಪಸ್ಥಿತರಿದ್ದರು.
Author: Karnataka Files
Post Views: 5





