ಕಳಸಾ ಬಂಡೋರಿ, ಮಹಾದಾಯಿ ಯೋಜನೆಗೆ ಆಗ್ರಹಿಸಿ ರೈಲ್ ರೋಖೋ ಚಳುವಳಿಯಲ್ಲಿ ಜೈಲು ಪಾಲಾಗಿದ್ದ ಹೋರಾಟಗಾರ ಕುತುಬುದ್ದಿನ ಖಾಜಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ರೈಲ್ ರೋಖೋ ಚಳುವಳಿಯಲ್ಲಿ ರೈಲ್ವೇ ಪೊಲೀಸರು ಸುಮಾರು 500 ರೈತರ ಮೇಲೆ ಕೇಸ್ ಧಾಖಲು ಮಾಡಿದ್ದರು. ರೈತ ಹೋರಾಟಗಾರರ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಕೈವಾಡವಿದೆ ಎಂದು ರೈತ ಸಂಘಟನೆಗಳ ಮುಖಂಡರು ಆರೋಪಿಸಿದ್ದರು.
ಕುತೂಬುದ್ದಿನ ಖಾಜಿ ಇಂದು ಹುಬ್ಬಳ್ಳಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಹೊಂದಿದ್ದಾರೆ. ಜೈಲಿಂದ ಹೊರಬರುತ್ತಿದ್ದಂತೆ ಖಾಜಿಯವರಿಗೆ ಮುಖಂಡ ಬಾಬಾಜಾನ ಮುಧೋಳ ಮಾಲೆ ಹಾಕಿ ಸ್ವಾಗತಿಸಿದರು.
Author: Karnataka Files
Post Views: 5





