Download Our App

Follow us

Home » ತಂತ್ರಜ್ಞಾನ » ಪ್ರಲ್ಲಾದ ಜೋಶಿಯವರ ಕನಸಿನ ಯೋಜನೆ ಸಾಕಾರ. ಧಾರವಾಡದಲ್ಲಿ ತಲೆ ಎತ್ತಿದೆ ಅತ್ಯಾಧುನಿಕ ಈಜುಗೋಳ

ಪ್ರಲ್ಲಾದ ಜೋಶಿಯವರ ಕನಸಿನ ಯೋಜನೆ ಸಾಕಾರ. ಧಾರವಾಡದಲ್ಲಿ ತಲೆ ಎತ್ತಿದೆ ಅತ್ಯಾಧುನಿಕ ಈಜುಗೋಳ

ಶಿಕ್ಷಣ, ಸಾಹಿತ್ಯ, ಸಂಗೀತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಧಾರವಾಡದಲ್ಲಿ ಅತ್ಯಾಧುನಿಕ ಈಜುಗೋಳ ಹಾಗೂ ಕ್ರೀಡಾ ಸಂಕೀರ್ಣ ಸಿದ್ದವಾಗಿದೆ. 

ಧಾರವಾಡದ ಡಿ ಸಿ ಕಾಂಪೌಂಡ್ ನಲ್ಲಿರುವ ಪಾಲಿಕೆಯ ಈಜುಗೋಳ ಇದೀಗ ಅಂತಾರಾಷ್ಟ್ರೀಯ ಸ್ವರೂಪ ಪಡೆದಿದೆ. ಶೇಕಡಾ 80 ರಷ್ಟು ಕಾಮಗಾರಿ ಮುಗಿದಿದೆ. 

ಕಂಪನಿಗಳ ಸಾರ್ವಜನಿಕ ಹೊಣೆಗಾರಿಕೆ ನಿಧಿ ಬಳಸಿ ಧಾರವಾಡದ ಡಿ.ಸಿ.ಕಾಂಪೌಡ್ ಬಳಿ 15 ಕೋಟಿ ರೂ. ವೆಚ್ಚದಲ್ಲಿ ಈಜುಗೋಳ ನಿರ್ಮಿಸಲಾಗುತ್ತಿದೆ. ಇದನ್ನು ಮೇಲ್ದರ್ಜೆಗೇರಿಸಿ ಕ್ರೀಡಾ ಸಮುಚ್ಚಯವನ್ನಾಗಿಸುವದಾಗಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ತಿಳಿಸಿದ್ದಾರೆ.

ಇದಕ್ಕೆ ತಗಲುವ ಹೆಚ್ಚುವರಿ 15 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ಕಾರ್ಪೊರೇಷನ್ ನೀಡಿದೆ. ಕಡೆಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಕನಸಿನ ಯೋಜನೆ ಸಾಕಾರಗೊಂಡಿದ್ದು, ಇಷ್ಟರಲ್ಲಿಯೇ ಅತ್ಯಾಧುನಿಕ ಈಜುಗೋಳ ಲೋಕಾರ್ಪಣೆಗೊಳ್ಳಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!