ಧಾರವಾಡದ ವಿಧ್ಯಾಗಿರಿ ಬಳಿ ಚಿಗರಿ ಬಸ್ಸೋಂದು ರಸ್ತೆ ದಾಟುತ್ತಿದ್ದವನ ಮೇಲೆ ಹಾಯ್ದು ಹೋದ ಘಟನೆ ನಡೆದಿದೆ.
ರಾಜಸ್ಥಾನ ಮೂಲದ ವಿಜಯಧನ ಎಂಬ ಕಾರ್ಮಿಕ ಕೆಲಸ ಮುಗಿಸಿ ಹುಬ್ಬಳ್ಳಿಗೆ ಹೊರಟಿದ್ದ ಎನ್ನಲಾಗಿದೆ. ಬಿ ಆರ್ ಟಿ ಎಸ್ ರಸ್ತೆ ದಾಟಿ ಹೋಗಬೇಕು ಎನ್ನುವಷ್ಟರಲ್ಲಿ ವೇಗವಾಗಿ ಬಂದ ಚಿಗರಿ ಬಸ್ಸು ಆತನ ಕಾಲಿನ ಮೇಲೆ ಹಾಯ್ದು ಹೋಗಿದೆ. ಪರಿಣಾಮ ಕಾಲು ಪೀಸ್ ಪೀಸ್ ಆಗಿದೆ.
BRTS ಬಸ್ಸು ಆರಂಭವಾದಾಗಿನಿಂದ ಒಂದಿಲ್ಲೊಂದು ರಸ್ತೆ ಅಪಘಾತಗಳು ಸಾಮಾನ್ಯವಾಗಿದ್ದು, ಧಾರವಾಡಕ್ಕೆ ಶಾಪವಾಗಿ ಮಾರ್ಪಟ್ಟಿದೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಧಾಖಲು ಮಾಡಲಾಗಿದೆ.
Author: Karnataka Files
Post Views: 6





