Download Our App

Follow us

Home » ಭಾರತ » ಬದರಿನಾಥದಲ್ಲಿ ಭೀಕರ ಹಿಮಪಾತ. 41 ಕಾರ್ಮಿಕರು ಮೃತಪಟ್ಟಿರುವ ಶಂಕೆ

ಬದರಿನಾಥದಲ್ಲಿ ಭೀಕರ ಹಿಮಪಾತ. 41 ಕಾರ್ಮಿಕರು ಮೃತಪಟ್ಟಿರುವ ಶಂಕೆ

ಉತ್ತರಾಖಂಡದ ಬದರಿನಾಥದಲ್ಲಿ ಭೀಕರ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ 57 ಕಾರ್ಮಿಕರು ಏಕಾಏಕಿ ಹಿಮಕುಸಿತಕ್ಕೆ ಸಿಲುಕಿದ್ದಾರೆ.

ಸದ್ಯ ಉತ್ತರಾಖಂಡ ರಾಜ್ಯದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಬೆಟ್ಟಗಳ ಮೇಲೆ ಹಿಮ ದಟ್ಟವಾಗಿ ಸಂಗ್ರಹವಾಗಿದೆ. ಬದರಿನಾಥ್ ಜಿಲ್ಲೆಯ ಥಾಮ್‌ನಲ್ಲಿರುವ ಬಿಆರ್‌ಒ ಹೆದ್ದಾರಿಯಲ್ಲಿ ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯ ಮಾಡುತ್ತಿದ್ದಾಗ, ಸಮೀಪದಲ್ಲಿದ್ದ ಮಂಜುಗಡ್ಡೆಗಳು ಇದ್ದಕ್ಕಿದ್ದಂತೆ ಮುರಿದು ಬಿದ್ದಿವೆ.

ಹಿಮಕುಸಿತ ಕಾರ್ಮಿಕರ ಮೇಲೆ ಬಿದ್ದಿದ್ದರಿಂದ ಪೊಲೀಸರು ಮತ್ತು ಬಿಆರ್‌ಒ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ 10 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಇನ್ನು 47 ಜನ ಕಾರ್ಮಿಕರು ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. 

ಹಿಮವು ದಟ್ಟವಾಗಿ ಬೀಳುತ್ತಿರುವುದರಿಂದ, ಎಷ್ಟು ಹಿಮವನ್ನು ಸೇರಿಸಿದರೂ, ಅದು ಇನ್ನೂ ಸಂಗ್ರಹವಾಗುತ್ತಲೇ ಇದೆ. ಮಾನ ಗ್ರಾಮದ ಬಿಆರ್‌ಒ ಕ್ಯಾಂಪ್‌ನ ಸಮೀಪವೇ ಈ ದುರ್ಘಟನೆ ನಡೆದಿದೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!