ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಯುವತಿಯೊಬ್ಬಳು, ಕ್ಷೇತ್ರದ ಅಭಿವೃದ್ಧಿ ಕುರಿತು ಕೇಂದ್ರ ಸಚಿವ ಪಲ್ಲಾದ ಜೋಶಿಯವರನ್ನು ಪ್ರಶ್ನಿಸಿ ಗಮನ ಸೆಳೆದಿದ್ದಾಳೆ.
ಈ ಯುವತಿ ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ಇದೀಗ ಚರ್ಚೆಗೆ ಕಾರಣವಾಗಿದೆ.
ಪ್ರಮುಖವಾಗಿ ಸಂಸದರ ನಿಧಿ ( MP_Lad ) ಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿ ಬಗ್ಗೆ ಆ ಯುವತಿ ಬೆಳಕು ಚೆಲ್ಲಿದ್ದಾಳೆ.
18 ನೇ ಲೋಕಸಭಾ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ 9.8 ಕೋಟಿ ಹಣ ಬಿಡುಗಡೆಯಾಗಿದ್ದು, ಈ ಪೈಕಿ ಈ ವರೆಗೆ ಕೇವಲ 1.11 ಕೋಟಿ ಮಾತ್ರ ಖರ್ಚಾಗಿರುವದನ್ನು ಆ ಯುವತಿ ತೋರಿಸಿದ್ದಾಳೆ.
101 ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು, 101 ಕಾಮಗಾರಿಗಳ ಪೈಕಿ ಕೇವಲ 11 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ.
ಸಂಸದರ ನಿಧಿಯಿಂದ ಸಮುದಾಯ ಭವನ ಮಾತ್ರ ನಿರ್ಮಾಣ ಮಾಡಲಾಗಿದ್ದು, ಒಂದೆರೆಡು ಶಾಲೆಗಳ ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾಳೆ.
ಆಕೆಯ ಎಕ್ಸ್ ಪೋಸ್ಟ್ ಇಲ್ಲಿದೆ. https://x.com/i/status/2007703609446936597
Author: Karnataka Files
Post Views: 701





