ಜಯ ಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಇಲ್ಲಿನ ಶ್ರೀನಗರ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.
ಧ್ವಜಾರೋಹಣನ್ನು ಹುಬ್ಬಳ್ಳಿ ಖಾಸಗಿ ಶಾಲೆಯ ಗುರುಗಳಾದ ಬಸವರಾಜ ಹುಬ್ಬಳ್ಳಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶಿವಾನಂದ ಹೊಸಮನಿ ಆಗಮಿಸಿದ್ದರು.
ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ, ವಿನೋದಗೌಡ ಪಾಟೀಲ, ಸುಭಾಸ ಬ್ರಹ್ಮಗೌಡ್ರು, ಮುತ್ತಣ್ಣ ಪೂಜಾರ, ನಾಗರಾಜ ನಾಯ್ಕರ, ಗುರಸಿದ್ದಪ್ಪ ಅವ್ವನವರ, ಬಸನಗೌಡ ಪಾಟೀಲ, ಗೋಪಾಲ ಪಾಟೀಲ, ಪ್ರಭು ರಾಯಚೂರ, ನಾಗರಾಜ ಪಟ್ಟಣಶೆಟ್ಟಿ, ಸಮೀರ ಮುಲ್ಲಾ, ಪ್ರಶಾಂತ ಜಾದವ, ರಾಜು ಗಾಯಕವಾಡ, ರವಿ ಮರಿಯಪ್ಪನವರ, ರಾಜು ಸವದತ್ತಿ, ರೇಖಾ ನವಲಗುಂದ, ಶಶಿಕಲಾ ಹುಬ್ಬಳ್ಳಿ, ಪ್ರೇಮಾ ಬಾಡದ, ಮುಂತಾದವರು ಉಪಸ್ಥಿದ್ದರು.





