ಧಾರವಾಡದ ಹೊಸ ಬಸ್ ನಿಲ್ದಾಣದ ಹಿಂದೆ ಸುಸಜ್ಜಿತವಾಗಿ ನಿರ್ಮಿಸಿರುವ ಗಾಂಧಿ ಭವನ ಅನಾಥವಾಗಿದೆ. ಒಳಗಡೆ ಗಾಂಧಿ ಪ್ರತಿಮೆಯಿಟ್ಟು ಹೊರಗಡೆ ಬೀಗ ಜಡಿಯಲಾಗಿದೆ.
ಸುಮಾರು 4 ಕೋಟಿ ವೆಚ್ಚದಲ್ಲಿ ಸರ್ಕಾರ ಧಾರವಾಡದಲ್ಲಿ ಗಾಂಧಿ ಭವನ ನಿರ್ಮಿಸಿದ್ದು, ವಾರ್ತಾ ಇಲಾಖೆ ಸುಪರ್ಧಿಯಲ್ಲಿದೆ.
ಅಕ್ಟೋಬರ್ 2 ಮತ್ತು ಜನೆವರಿ 30 ರಂದು ಮಾತ್ರ ಗಾಂಧಿ ಭವನದ ಬಾಗಿಲು ತೆರೆದು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮತ್ತೆ ಬಾಗಿಲು ಹಾಕಲು 4 ಕೋಟಿ ವೆಚ್ಚ ಮಾಡಬೇಕಾ ಎಂಬುದು ಸಾರ್ವಜನಿಕರಿಗೆ ಕಾಡುತ್ತಿರುವ ಪ್ರಶ್ನೆ.
ಗಾಂಧಿ ಭವನದಲ್ಲಿ, ಗಾಂಧೀಜಿಯವರ ಕುರಿತು ತಿಳಿದುಕೊಳ್ಳಲು ವ್ಯವಸ್ಥೆ ಇದೇ. ಸ್ವಾತಂತ್ರ್ಯ ಚಳುವಳಿ ಸೇರಿದಂತೆ ಐತಿಹಾಸಿಕ ಘಟನೆ ಮೆಲಕು ಹಾಕಲು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವದರ ಬದಲು, ವಾರ್ತಾ ಇಲಾಖೆ ವರ್ಷದಲ್ಲಿ ಎರಡು ಸಲ ಮಾಲೆ ಹಾಕಲು ಅಷ್ಟೇ ಈ ಗಾಂಧಿ ಭವನವನ್ನು ಬಳಕೆ ಮಾಡುತ್ತಿರುವದು ವಿಪರ್ಯಾಸದ ಸಂಗತಿ.
ಇನ್ನಾದರು ಗಾಂಧಿ ಭವನ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
Author: Karnataka Files
Post Views: 249





