ಮಾದ್ಯಮ ಕ್ಷೇತ್ರದಲ್ಲಿ ಕಳೆದ 16 ವರ್ಷಗಳ ಸೇವೆ ಪರಿಗಣಿಸಿ ಹಿರಿಯ ಪತ್ರಕರ್ತ ಗಣೇಶ್ ಪಾಟೀಲ್ ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಯಾದಗಿರಿ ನಗರದ ಪಂಪ ಮಹಾಕವಿ ಮಂಟಪದಲ್ಲಿ ಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕುವೆಂಪು ಪ್ರಶಸ್ತಿ ನೀಡಲಾಯಿತು. ನಾಲವಾರ ಶ್ರೀ ಮಠದ ತೋಟೇಂದ್ರ ಮಹಾಸ್ವಾಮಿಗಳು ಪ್ರಶಸ್ತಿ ನೀಡಿ ಗೌರವಿಸಿದರು.
ಈ ವೇಳೆ ಶ್ರೀಗಳಿಗೆ ಮಾಜಿ ಸಚಿವ ಶಿವನಗೌಡ ನಾಯಕ್ ಸರಿಗಮಪ ಕ್ಯಾತಿಯ ಬಾಳು ಬೆಳಗುಂದಿ ಕು.ಲಲಿತಾ ಅನಪೂರ್ ಹಾಗೂ ಜಯ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ್ ನಾಯಕ ಸಾಥ್ ನೀಡಿದ್ದು, ಹಲವರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಗಣೇಶ್ ಪಾಟೀಲ್ ಈ ಪ್ರಶಸ್ತಿ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ನಾನು ಪ್ರಾಮಾಣಿಕವಾಗಿ ನಿರಂತರ ಸೇವೆ ಸಲ್ಲಿಸಲು ಅಣಿಯಾಗಿದ್ದೇನೆಂದು ಹೇಳಿದ್ದರು.
Author: Karnataka Files
Post Views: 137





