ನವಲಗುಂದ ತಾಲೂಕಿನ ಕಾಂಗ್ರೇಸ್ ಅಂಗಳದಲ್ಲಿನ ರಾಜಕಾರಣದಲ್ಲಿ ಸಣ್ಣಗೆ ವೈಮನಸ್ಸುಗಳು ಗೂಡು ಕಟ್ಟುತ್ತಿವೆ.
ವಲಸೆ ಹಾಗೂ ಮೂಲ ಕಾಂಗ್ರೇಸ್ಸಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಒಂದು ಬಣದ ಬೆಂಬಲಿಗರನ್ನು ನಿರ್ಲಕ್ಷ ಮಾಡಲಾಗುತ್ತಿದ್ದು, ಒಡೆದು ಹೋದ ಕನ್ನಡಿಯಂತಾಗಿದೆ.
ಅಷ್ಟಕ್ಕೂ ಇನ್ನೇರೆಡು ವರ್ಷ ಕಾಯುವಿಕೆ ಅನಿವಾರ್ಯ ಎಂಬಂತ ಮಾತು ಮತ್ತು ” ಮಾತು ಮಾತಾಗಿರಬೇಕು ” ಎಂದು ಹೇಳಿ ಗಟ್ಟಿ ಮನಸ್ಸುಗಳು ಒಂದಾಗುತ್ತಿವೆ.
ಪವಾಡ ಪುರುಷ ನವಲಗುಂದ ನಾಗಲಿಂಗ ಸ್ವಾಮಿಗಳು ಹೇಳಿದಂತೆ ” ಮನಸ್ಸೇ ಮಡಿ ಉಳಿದಿದ್ದೆಲ್ಲ ಕಾಲ್ಮಡಿ ” ಎಂಬ ಬಾವ ಇಟ್ಟುಕೊಂಡು ರಾಜಕೀಯ ಪಟ್ಟುಗಳನ್ನು ಹೆಣೆಯಲಾಗುತ್ತಿದೆ.
Author: Karnataka Files
Post Views: 367





