ನಿನ್ನೆ ಧಾರವಾಡದ ಹೊರವಲಯದಲ್ಲಿ ಬೆಳಿಗ್ಗೆ ಬೆಚ್ಚಿ ಬೀಳಿಸಿದ್ದ ಮುಸ್ಲಿಮ್ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಬೀರ ಮುಲ್ಲಾನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹ ಕೇಳಿ ಬಂದಿದೆ.
ಜಾಕಿಯಾ ಮುಲ್ಲಾ ಎಂಬ ಯುವತಿಯನ್ನು ಸಾಬೀರ್ ಮುಲ್ಲಾ ಎಂಬಾತ ಕೊಲೆ ಮಾಡಿ ಬಿಸಾಡಿ ಬಂದಿದ್ದ. ಸಾಬೀರ್ ನ ಮೃಗಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಂದು ಮೃತ ಜಾಕಿಯಾ ಮುಲ್ಲಾ ಇವಳ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಪಾರ್ಥಿವ ಶರೀರವನ್ನು ಪೊಲೀಸರು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದುಬಸ್ತ ಮಾಡಿದ್ದರು.
Author: Karnataka Files
Post Views: 1,584





