ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮರಲಿಗ ಗ್ರಾಮದ ಯುವಕರು ಮದುವೆಗೆ ಹೆಣ್ಣು ಸಿಗ್ತಿಲ್ಲ ಅನ್ನೋ ಕಾರಣಕ್ಕೆ ಮಠವನ್ನಾದರು ಕಟ್ಟಿಕೊಳ್ತೀವೆ ಜಾಗ ಕೊಡಿ ಎಂದು ಅವಲತ್ತುಕೊಂಡಿದ್ದಾರೆ.
ಕನ್ಯೆ ಸಿಗದ ಕಾರಣ ನಿರಾಶೆಗೊಂಡ ಗ್ರಾಮದ ಅವಿವಾಹಿತರು ಗ್ರಾಮ ಸಭೆಯಲ್ಲಿ, ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ.
ಮದುವೆ ಮಾಡಿಕೊಳ್ಳಬೇಕೆಂದರೆ ರೈತರ ಮಕ್ಕಳು ಎಂಬ ಕಾರಣಕ್ಕೆ ಹೆಣ್ಣು ಕೊಡುತ್ತಿಲ್ಲ. ನಮಗೆ ಮಠವನ್ನಾದರು ಕಟ್ಟಲು ಭೂಮಿ ಮಂಜೂರು ಮಾಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.
30 ರಿಂದ 40 ವರ್ಷ ವಯಸ್ಸಿನ ಸುಮಾರು 50 ಕ್ಕೂ ಹೆಚ್ಚು ಅವಿವಾಹಿತರು ಹತಾಶೆಯಲ್ಲಿದ್ದಾರೆ ಎನ್ನಲಾಗಿದೆ.
Author: Karnataka Files
Post Views: 364





