ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ.
ಕೋರ್ಟನಿಂದ ಇನ್ನೂವರೆಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದ ಅವರು, ಬಂದ ನಂತರ ಶಾಸಕ ಸ್ಥಾನದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಯು ಟಿ ಖಾದರ ಅವರು ತಿಳಿಸಿದ್ದಾರೆ.
ವಿಧಿಸಿರುವ ಜೀವಾವಧಿ ಶಿಕ್ಷೆ ಆದೇಶಕ್ಕೆ ಹೈಕೋರ್ಟನಲ್ಲಿ ತಡೆ ಸಿಕ್ಕರೆ ವಿನಯ ಕುಲಕರ್ಣಿಯವರು ಶಾಸಕ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಅವರು ತಿಳಿಸಿದ್ದಾರೆ.
Author: Karnataka Files
Post Views: 774




