ಧಾರವಾಡ ಪ್ರತ್ತೈಕ ಪಾಲಿಕೆ ವಿಷಯದಲ್ಲಿ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಿದ್ದು, ಮೊದಲ ಹಂತದ ಹೋರಾಟಕ್ಕೆ ಜೈ ಎಂದಿದ್ದ ಬಿಜೆಪಿ ತದನಂತರ ಉಲ್ಟಾ ಹೊಡೆದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
ನಿನ್ನೆಯಿಂದ ಆರಂಭವಾಗಿದ್ದ ಹೋರಾಟದ ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ದಿಕ್ಕಾರದ ಫಲಕಗಳನ್ನು ಹಾಕಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು, ಪ್ರತ್ತೈಕ ಪಾಲಿಕೆ ಬಗ್ಗೆ ಚರ್ಚೆ ನಡೆಸಲು ಸಮಯ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಅದರ ಒಂದು ಪ್ರತಿಯನ್ನು ಬಿ ಡಿ ಹಿರೇಮಠ ಅವರಿಗೆ ಕಳಿಸಲಾಗಿದೆ. ಧಾರವಾಡದಲ್ಲಿ ಪ್ರತ್ತೈಕ್ ಪಾಲಿಕೆಗೆ ಆಗ್ರಹಿಸಿ ಪಕ್ಷಾತೀತ ಹೋರಾಟ ನಡೆದಿದ್ದು, ಜೋಶಿಯವರನ್ನು ಈ ಹೋರಾಟ ಜಾಗೃತಗೂಳಿಸಿದೆ.
ಪಕ್ಷಾತೀತ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದ್ದು, ಹೋರಾಟದ ಪ್ರಮುಖರೊಂದಿಗೆ ಜೋಶಿಯವರು, ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಬಂದೊದಗಿದಂತಾಗಿದೆ.
Author: Karnataka Files
Post Views: 215





