ಪ್ರತ್ತೈಕ್ ಪಾಲಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ನಡೆಯುತ್ತಿರುವ ಸತ್ಯ ಪ್ರತಿಪಾದನಾ ಸತ್ಯಾಗ್ರಹ ತಾರಕಕ್ಕೇರಿದೆ.
ಹೋರಾಟದ ನೇತೃತ್ವ ವಹಿಸಿರುವ ಬಿ ಡಿ ಹಿರೇಮಠರು ಹಠತೊಟ್ಟಿದ್ದಾರೆ. ಅವರು ಇಂದಿನಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಹೋರಾಟದ ತೀವ್ರತೆಯನ್ನು ಗಮನಿಸಿದ ಬಿಜೆಪಿ ನಾಯಕರು ನಾಳೆ ತಮ್ಮ ಪಾಲಿಕೆ ಸದಸ್ಯರೊಡನೆ ಸತ್ಯಾಗ್ರಹಕ್ಕೆ ಬೆಂಬಲ ಕೊಡಲು ತೀರ್ಮಾನಿಸಿದ್ದಾರೆ.
ನಾಳೆ ಮೆರವಣಿಗೆ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಬರುವ ಬಿಜೆಪಿಗರು, ಬೆಂಬಲ ಸೂಚಿಸಲಿದ್ದಾರೆ.
ಈಗಾಗಲೇ ಉಭಯ ಪಕ್ಷಗಳ ಮಂತ್ರಿಗಳು ಶಾಸಕರ ಜೊತೆ ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿರುವ ಹೋರಾಟಗಾರರು, ಸತ್ಯಾಗ್ರಹವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ರಾಜ್ಯಪಾಲರ ಅಂಕಿತ ಬೀಳುವವರೆಗೂ ಹೋರಾಟ ಕೈಬಿಡುವ ಪ್ರಶ್ನೆ ಇಲ್ಲಾ ಎಂದು ಖಡಕ್ಕಾಗಿ ಹೇಳಿರುವ ಬಿ ಡಿ ಹಿರೇಮಠ ಅವರು, ಧಾರವಾಡ ಬಂದ್ ಆಚರಣೆಗೂ ಕರೆ ಕೊಟ್ಟಿದ್ದಾರೆ.
Author: Karnataka Files
Post Views: 643





