Download Our App

Follow us

Home » ಕಾನೂನು » ಕರ್ತವ್ಯದ ಮಧ್ಯೆಯೂ ಸಾಮಾಜಿಕ ಕಳಕಳಿ ಮೆರೆದ ಪೊಲೀಸ್. PWD ಅಧಿಕಾರಿಗಳೇ ನಿಮಗೆ ನಾಚಿಕೆಯಾಗ್ಬೇಕು.

ಕರ್ತವ್ಯದ ಮಧ್ಯೆಯೂ ಸಾಮಾಜಿಕ ಕಳಕಳಿ ಮೆರೆದ ಪೊಲೀಸ್. PWD ಅಧಿಕಾರಿಗಳೇ ನಿಮಗೆ ನಾಚಿಕೆಯಾಗ್ಬೇಕು.

ಧಾರವಾಡದ ಸಂಚಾರಿ ಪೊಲೀಸ್ ಒಬ್ಬರು, ಕರ್ತವ್ಯದ ಮಧ್ಯೆಯೂ ಸಾಮಾಜಿಕ ಕಳಕಳಿ ಮೆರೆದು, ಜನರಿಂದ ಮೆಚ್ಚುಗೆ ಗಳಿಸಿದ್ದಾರೆ. ಧಾರವಾಡದ 

ಜ್ಯುಬಿಲಿ ಸರ್ಕಲ್ ನಲ್ಲಿ ಕಳೆದ ಕೆಲವು ತಿಂಗಳಿನಿಂದ ದೊಡ್ಡ ತೆಗ್ಗು ಗುಂಡಿ ಬಿದ್ದಿತ್ತು. ಸುಗಮ ವಾಹನ ಸಂಚಾರಕ್ಕೆ ತೆಗ್ಗು ಗುಂಡಿ ತೊಂದರೆ ಕೊಟ್ಟಿತ್ತು. ಕೆಲ ದ್ವಿಚಕ್ರ ವಾಹನ ಸವಾರರು, ತೆಗ್ಗು ಗುಂಡಿ ತಪ್ಪಿಸಲು ಕೈ ಕಾಲು ಮುರಿದುಕೊಂಡಿದ್ದರು. ಲೋಕೋಪಯೋಗಿ ಇಲಾಖೆಯವರು ರಸ್ತೆ ಸರಿಪಡಿಸುತ್ತಾರೆ ಎಂದು ಕಾದು ಕುಳಿತರು, ಅಧಿಕಾರಿಗಳು ಮಾತ್ರ ತಿರುಗಿ ನೋಡಲೇ ಇಲ್ಲ. ರಸ್ತೇ ಗುಂಡಿಯಿಂದಾಗಿ ಮೇಲಿಂದ ಮೇಲೆ ಅಪಘಾತವಾಗುತ್ತಿರುವದನ್ನು ಗಮನಿಸಿದ ಸಂಚಾರಿ ಪೊಲೀಸ ಕಲ್ಮೇಶ್ವರ ಹಿರೇಮಠ, ತಾವೇ ಸ್ವತಃಹ ನಿಂತು ತೆಗ್ಗು ಗುಂಡಿಯನ್ನು ಮುಚ್ಚಿದ್ದಾರೆ.

ಧಾರವಾಡದ ಪ್ರಮುಖ ಸರ್ಕಲ್ ಆಗಿದೆ. ಇಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಪ್ರಮುಖ ಸರ್ಕಲನಲ್ಲಿ ತೆಗ್ಗು ಗುಂಡಿ ಮುಚ್ಚುವ ಮೂಲಕ ಕಲ್ಮೇಶ್ವರ ಹಿರೇಮಠ, ಇಲಾಖೆಗೆ ಹೆಸರು ತಂದುಕೊಟ್ಟಿದ್ದಾರೆ. ಸಂಚಾರಿ ಪೊಲೀಸ್ ಪೇದೆ ಕಲ್ಮೇಶ್ವರ ಕೆಲಸಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!