ಮೊಹಮ್ಮದ್ ಪೈಗಂಬರ್ ರವರ ಜನ್ಮ ದಿನ ಹಾಗೂ ಭಾವೈಕ್ಯತೆಯ ಸಂಕೇತವಾಗಿರುವ ಈದ್ ಮಿಲಾದುನ್ನಭಿ ಹಬ್ಬದ ಪ್ರಯುಕ್ತ ಕೆಪಿಸಿಸಿ ಸಂಯೋಜಕರು ಹಾಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಬಂಗಾರೇಶ ಹಿರೇಮಠ ,ರಾಜಶೇಖರ ಮೆಣಸಿನಕಾಯಿ ರವರು ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳಿಗೆ ಹಾಗೂ ಸಮುದಾಯದ ಮುಖಂಡರಿಗೆ ಶುಭಕೋರಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎ ಎಂ ಹಿಂಡಸಗೇರಿ , ಮಾಜಿ ಸಂಸದರಾದ ಪ್ರೋ ಐ ಜಿ ಸನದಿ , ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಲ್ತಾಫ್ ಹಳ್ಳೂರ್ , ಶಾಕಿರ್ ಸನದಿ , ಪಾಲಿಕೆ ಸದಸ್ಯ ಬಶೀರ್ ಗುಡಮಾಲ್ , ಬಾಬಾಜಾನ್ ಮುಧೋಳ , ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು

Author: Karnataka Files
Post Views: 8





