ಮುಜರಾಯಿ ವ್ಯಾಪ್ತಿಯ ದೇವಸ್ಥಾನದ ಅರ್ಚಕರಿಗೆ ಸಿದ್ದರಾಮಯ್ಯ ಸರ್ಕಾರ ಬಂಪರ ಕೊಡುಗೆ ಘೋಷಿಸಿದೆ. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು ಮೃತಪಟ್ಟರೆ 2 ಲಕ್ಷ ಪರಿಹಾರ ಕೊಡುವದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅರ್ಚಕರಿಗೆ ಅಯುಷ್ಮಾನ ಭಾರತ ಅಡಿ ಆರೋಗ್ಯ ಕಾರ್ಡ ಕೊಡುವದಾಗಿ ಹೇಳಿದ್ದಾರೆ. ಅಲ್ಲದೆ ವರ್ಷಕ್ಕೆ 1200 ಅರ್ಚಕರನ್ನು ಕಾಶಿ ಯಾತ್ರೆಗೆ ಉಚಿತವಾಗಿ ಕಲಿಸಲು ಸರ್ಕಾರ ನಿರ್ಧರಿಸಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅರ್ಚಕರು ಮತ್ತು ನೌಕರರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವದಾಗಿ ಹೇಳಿದ್ದು, ಪಿ ಯು ಸಿ, ಡಿಪ್ಲೋಮಾ, ಐಟಿಐ ವ್ಯಾಸಂಗ ಮಾಡುವವರಿಗೆ 5 ಸಾವಿರ ರೂಪಾಯಿ ಮತ್ತು ಪದವಿ ವ್ಯಾಸಂಗ ಮಾಡುವವರಿಗೆ 7 ಸಾವಿರ ರೂಪಾಯಿ, ಸ್ನಾತಕೋತ್ತರಕ್ಕೆ 15 ಸಾವಿರ, ಆಯುರ್ವೇದ, ಹೋಮಿಯೋಪತಿಗೆ 25 ಸಾವಿರ ರೂಪಾಯಿ, ವೈಧ್ಯಕೀಯ, ದಂತ ವೈಧ್ಯಕೀಯಕ್ಕೆ 50 ಸಾವಿರ ಪ್ರೋತ್ಸಾಹಧನ ನೀಡುವದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
Author: Karnataka Files
Post Views: 7





