Download Our App

Follow us

Home » ಕಾನೂನು » ನಕ್ಸಲ್ ರವೀಂದ್ರ ಇಂದು ಶರಣು. ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ..

ನಕ್ಸಲ್ ರವೀಂದ್ರ ಇಂದು ಶರಣು. ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ..

ಭೂಗತರಾಗಿದ್ದ ಶೃಂಗೇರಿಯ ನಕ್ಷಲ್ ರವೀಂದ್ರ ಎಂಬುವವರು ಇಂದು ಚಿಕ್ಕಮಗಳೂರಿನಲ್ಲಿ ಎಸ್ ಪಿ ವಿಕ್ರಮ ಅಮಟೆ ಹಾಗೂ ಜಿಲ್ಲಾಧಿಕಾರಿ ಮೀನಾ ನಾಗರಾಜ ಎದುರು ಶರಣಾದರು.

ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ರವೀಂದ್ರರ ಮೇಲೆ ಒಟ್ಟು 21 ಪ್ರಕರಣಗಳಿದ್ದವು. ಕೇರಳದಲ್ಲಿ 8 ಹಾಗೂ ಚಿಕ್ಕಮಗಳೂರಿನಲ್ಲಿ 13 ಕೇಸುಗಳು ದಾಖಲಾಗಿದ್ದವು. 

ಧಾರವಾಡದ ಸಾಧನಾ ಸಂಸ್ಥೆಯ ಡಾ. ಇಸಬೆಲ್ಲಾ ಝೆವಿಯರ, ರಮೇಶ ನಗರಕರ, ವಿ ಎಸ್ ಶ್ರೀಧರ, ವೆಂಕಟೇಶ, ಕೆ ಎಲ್ ಅಶೋಕ, ಸುರೇಶ ನಾಯ್ಕ, ಗೌಸ್ ಮೋಹಿದ್ದಿನ, ವಕೀಲರಾದ ಶ್ರೀಪಾದ ಸಮ್ಮುಖದಲ್ಲಿ ನಕ್ಸಲ್ ರವೀಂದ್ರ ಜಿಲ್ಲಾಡಳಿತದ ಮುಂದೆ ಶರಣಾದರು. 

ಇದರೊಂದಿಗೆ ಈಗ ಕರ್ನಾಟಕ, ನಕ್ಸಲ್ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!