Download Our App

Follow us

Home » ಕ್ರೀಡೆ » ಮಧ್ಯಾಹ್ನ ಆರ್ ಸಿ ಬಿ ಸಂಭ್ರಮ, ಸಂಜೆ ಸೂತಕ. ಸತ್ತವರ ಸಂಖ್ಯೆ 11 ಕ್ಕೇ ಏರಿಕೆ

ಮಧ್ಯಾಹ್ನ ಆರ್ ಸಿ ಬಿ ಸಂಭ್ರಮ, ಸಂಜೆ ಸೂತಕ. ಸತ್ತವರ ಸಂಖ್ಯೆ 11 ಕ್ಕೇ ಏರಿಕೆ

ರಾಜಧಾನಿ ಬೆಂಗಳೂರಿಗೆ ಇಂದು ಕರಾಳ ದಿನವಾಗಿತ್ತು. ಯಾರು ಊಹಿಸದ ರೀತಿಯಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. 

ಐ ಪಿ ಎಲ್ ಟೂರ್ನಿಯಲ್ಲಿ ಆರ್ ಸಿ ಬಿ ತಂಡ ಐತಿಹಾಸಿಕ ಗೆಲುವು ಸಾಧಿಸಿದ್ದರ ಪರಿಣಾಮ ಬೆಂಗಳೂರಲ್ಲಿ ಇಂದು ಮಧ್ಯಾಹ್ನದ ವೇಳೆ ಸಂಭ್ರಮ ಮನೆ ಮಾಡಿತ್ತು. 

ಮಧ್ಯಾಹ್ನದ ಹೊತ್ತಿಗೆ ಸರ್ಕಾರದ ಪರವಾಗಿ ಆರ್ ಸಿ ಬಿ ಆಟಗಾರರನ್ನು ಶಕ್ತಿ ಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಎಲ್ಲರೂ ಖುಷಿ ಖುಷಿಯಾಗಿ ಭಾಗವಹಿಸಿದ್ದರು. ಆರ್ ಸಿ ಬಿ ಪರ ಜಯಘೋಷ ಮೊಳಗಿಸಿದ್ದರು. 

ಅದ್ಯಾರ ಕಣ್ಣು ಬಿದ್ದಿತ್ತೋ ಗೊತ್ತಿಲ್ಲ, ಮಧ್ಯಾಹ್ನದ ಹೊತ್ತಿಗೆ ಸಂಭ್ರಮದಲ್ಲಿ ತೇಲಿದ್ದ ರಾಜಧಾನಿ ಬೆಂಗಳೂರಿನಲ್ಲಿ ಸೂತಕ ಆವರಿಸಿತ್ತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಸಮಾರಂಭಕ್ಕೆ ಸಾಕ್ಷಿಯಾಗಲು ಮೂರು ಲಕ್ಷಕ್ಕಿಂತ ಹೆಚ್ಚು ಅಭಿಮಾನಿಗಳು ಸೇರಿದ್ದರು.

ಮೈದಾನದ ಒಳಗೆ ಹೋಗುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದಾರೆ. 33 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಈ ಅನಿರೀಕ್ಷಿತ ಘಟನೆ ರಾಜಧಾನಿಯಲ್ಲಿ ನಡೆದಿದ್ದು, ಸರ್ಕಾರ ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!