ಬಳ್ಳಾರಿಯ ಮಹಾನಗರ ಪಾಲಿಕೆ ಸದಸ್ಯ ಎಂ.ಡಿ.ಆಸಿಫ್ ಮೇಲೆ ದೂರು ದಾಖಲಾಗಿದೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ. ಅಹ್ಮದ್ ಹುಸೇನ್ ಎಂಬುವವರ ಸಂಬಂಧಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಆಸಿಫ್ ಅವರ ವಿರುದ್ಧ ದೂರು ದಾಖಲಾಗಿದೆ.
ಅಹ್ಮದ್ ಹುಸೇನ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಆತ್ಮಹತ್ಯೆಗೆ ಆಸಿಫ್ ಅವರ ವರ್ತನೆಯೇ ಕಾರಣ ಎಂದು ಎಸ್ಪಿ ಅವರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಅಹ್ಮದ್ ಹುಸೇನ್ ಅವರ ಪತ್ನಿಯೊಂದಿಗೆ ಪಾಲಿಕೆ ಸದಸ್ಯ ಆಸಿಫ್ ಆತ್ಮೀಯತೆಯನ್ನು ಹೊಂದಿದ್ದರು. ಈ ಆತ್ಮೀಯತೆಯೇ ಅಹ್ಮದ್ ಹುಸೇನ್ ಅವರ ಆತ್ಮಹತ್ಯೆಗೆ ಕಾರಣ ಎಂದು ಅಹ್ಮದ್ ಹುಸೇನ್ ಸಂಬಂಧಿಕರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಅವರು ಎಸ್ ಪಿ ತಿಳಿಸಿದ್ದಾರೆ.

Author: Karnataka Files
Post Views: 1





