ಕರ್ನಾಟಕದ ಬಿಜೆಪಿಯಲ್ಲಿ ಉತ್ತಮವಾಗಿ ಓದಿಕೊಂಡ ಕೆಲವೇ ಕೆಲವು ಶಾಸಕರ ಪೈಕಿ ಪಿ ರಾಜೀವ್ ಒಬ್ಬರು. ಕುಡಚಿ ಮತಕ್ಷೇತ್ರದಿಂದ ಎರಡು ಬಾರಿ ಗೆದ್ದು, ಮೂರನೇ ಬಾರಿ ಸೋಲು ಅನುಭವಿಸಿರುವ ಪಿ ರಾಜೀವ್, ಉತ್ತಮ ವಾಗ್ಮಿ.

ಸಂವಿಧಾನದ ಬಗ್ಗೆ ಪಟ ಪಟ ಅಂತ ಮಾತನಾಡುವ ಪಿ ರಾಜೀವ್ ಸಂಘಟನಾ ಚತುರವು ಹೌದು. ಸದನದಲ್ಲಿ ಸಂವಿಧಾನ ವಿಷಯವಾಗಿ ಪಿ ರಾಜೀವ್ ಮಾತನಾಡಲು ನಿಂತರೆ, ಸದನದ ಸದಸ್ಯರ ಗಮನ ಪಿ ರಾಜೀವ್ ಮೇಲೆ ಇರುತ್ತಿತ್ತು.

ಇತ್ತೀಚಿನ ರಾಜಕೀಯ ಪರಿಸ್ಥಿತಿ ಇಂದ ರೋಸಿ ಹೋಗಿರುವಂತೆ ಕಾಣುವ ಪಿ ರಾಜೀವ್, ರಾಜಕೀಯ ಬದಿಗಿಟ್ಟು, ಅಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಭಗವದ್ಗೀತೆ ಓದುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಮೂಲಕ ಭಗವದ್ಗೀತೆಯ ಅಧ್ಯಾಯ ಮತ್ತು ಶ್ಲೋಕಗಳನ್ನು ಹೇಳಿ ಕೊಡುತ್ತಿದ್ದಾರೆ. ಆಟ ಪಾಠದ ಜೊತೆ ಓದುವ ಹವ್ಯಾಸ ಬೆಳೆಸಿಕೊಂಡಿರುವ ಪಿ ರಾಜೀವ್ ಮಾಜಿ ಶಾಸಕರಾಗಿದ್ದರು, ಸಹ ಕ್ರೀಯಾಶೀಲತೆ ಮೈಗೂಡಿಸಿಕೊಂಡಿದ್ದಾರೆ
Author: Karnataka Files
Post Views: 7





