ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ 5 ಕೋಟಿ ವಂಚನೆ ಮಾಡಿದ ಚೈತ್ರಾ & ಗ್ಯಾಂಗಿನ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನ ಸ್ವಾಮೀಜಿಯೊಬ್ಬರಿಗೆ ಬೆಂಗಳೂರಿನ ಸಿ ಸಿ ಬಿ ನೋಟಿಸ್ ಜಾರಿ ಮಾಡಿದೆ. ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿರುವ ಸಿ ಸಿ ಬಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. 5 ಕೋಟಿ ವಂಚಿಸಿ ಸಿಕ್ಕುಬಿದ್ದಿರುವ ವಂಚಕಿ ಚೈತ್ರಾ ಈ ಹಿಂದೆ ವಜ್ರದೇಹಿ ಸ್ವಾಮೀಜಿ ಹೆಸರು ಪ್ರಸ್ತಾಪ ಮಾಡಿದ್ದಳು ಎನ್ನಲಾಗಿದೆ. ಆದರೆ ವಜ್ರದೇಹಿ ಸ್ವಾಮೀಜಿ, ಚೈತ್ರಾ ಬಂಧನವಾಗುತ್ತಿದ್ದಂತೆ, ನನಗೂ ಚೈತ್ರಾಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಸಧ್ಯ ಈ ಪ್ರಕರಣ ಬಗೆದಷ್ಟು ಆಳಕ್ಕೆ ಇಳಿಯುತ್ತಿದ್ದು, ಪ್ರಕರಣ ಇದೀಗ ವಜ್ರದೇಹಿ ಸ್ವಾಮೀಜಿ ಬುಡಕ್ಕೆ ಬಂದಿದೆ.
Author: Karnataka Files
Post Views: 5





