ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿದ್ದೆ ತಡ, ಈ ವಿಷಯ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಜಾತಿ ಜನಗಣತಿ ವಿಚಾರ ಮುನ್ನೇಲೆಗೆ ಬಂದಿದೆ. ಕಾಂಗ್ರೇಸ್ ಯುವರಾಜಾ ರಾಹುಲ್ ಗಾಂಧಿ, ಜಾತಿ ಜನಗಣತಿ ಮಾಡಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬುವದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಹಿಂದುಳಿದ ವರ್ಗದ ಜನರ ಹಿತದಲ್ಲಿ ಯಾವ ಕೆಲಸವನ್ನು ಮಾಡಿಲ್ಲ ಎಂದು ಕಾಂಗ್ರೇಸ್ ಆರೋಪಿಸುತ್ತಿದೆ.
ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸರ್ಕಾರಕ್ಕೆ ಶೀಘ್ರವಾಗಿ ಜಾತಿ ಜನಗಣತಿ ವರದಿ ಸಲ್ಲಿಸಬೇಕೆಂದು, ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಯವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿನಂತಿಸಿದ್ದಾರೆ. ನವೆಂಬರ 25 ರ ಒಳಗೆ ಜಾತಿ ಜನಗಣತಿ ವರದಿ ಸರ್ಕಾರದ ಕೈ ಸೇರಲಿದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಹಿಂದುಳಿದ ವರ್ಗ ದೊಡ್ಡ ಸಂಖ್ಯೆಯಲ್ಲಿದೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ, ಜಾತಿ ಜನಗಣತಿ ವರದಿ ಬಹಿರಂಗ ಪಡಿಸಲು ಯೋಚಿಸಲಾಗಿದೆ. 2019 ರಲ್ಲಿ ಎಚ್ ಡಿ ಕುಮಾರಸ್ವಾಮಿ ಮತ್ತು 2020-21 ರಲ್ಲಿ ಯಡಿಯೂರಪ್ಪ, 2022-23 ರಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಾತಿ ಜನಗಣತಿ ವರದಿ ಸಿದ್ದವಾಗಿದ್ದರು, ಅಂದಿನ ಸರ್ಕಾರಗಳು ಅದರ ಗೋಜಿಗೆ ಹೋಗಿರಲಿಲ್ಲ.

ಒಟ್ಟಾರೆ, ಕರ್ನಾಟಕ ಸರ್ಕಾರ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲು ಉತ್ಸುಕವಾಗಿದ್ದು, ಜಾತಿ ಜನಗಣತಿ ಹೊರಬಿದ್ದ ಮೇಲೆ ರಾಜಕೀಯ ಗರಿಗೆದರಲಿದೆ. ಯಾವ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ ಅನ್ನೋದು ನಿಖರವಾಗಿ ಗೊತ್ತಾಗಲಿದೆ.





