ಇಂಡಿಯಾ ಅನ್ನೋದು ಬ್ರಿಟಿಷರು ಇಟ್ಟ ಹೆಸರು, ಅದರ ಬದಲಾಗಿ ಭಾರತ ಎಂದು ಕರೆದರೆ ತಪ್ಪಲ್ಲ ಎಂದು ಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹೊರದೇಶಕ್ಕೆ ಹೋದಾಗ are you from india ಅಂತಾರೆ. ಇಂಡಿಯಾ ಬ್ರಿಟಿಷರ ಕಾಲದ್ದು ಎಂದು ಹೇಳಿದ ಅವರು, ಸರ್ಕಾರ ಏಕಮುಖ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು. ಪಠ್ಯ ಪುಸ್ತಕದಲ್ಲಿಯೂ ಭಾರತ ಅಂತ ನಮೂದು ಮಾಡಿದರೆ ತಪ್ಪಲ್ಲ ಎಂದರು. ಅಲ್ಲದೆ ಕೇಂದ್ರ ಸರ್ಕಾರ ಏನು ನಿರ್ದೇಶನ ನೀಡತ್ತೋ ಅದನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ಹೇಳುವ ಮೂಲಕ ಹೊರಟ್ಟಿಯವರು ಕೇಂದ್ರದ ನಿರ್ಧಾರ ಬೆಂಬಲಸಿದ್ದಾರೆ.
Author: Karnataka Files
Post Views: 4





