Download Our App

Follow us

Home » ಕಾನೂನು » ಕಾನೂನು ಸಚಿವರಿಂದ ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಯ ಪುಸ್ತಕ ಬಿಡುಗಡೆ

ಕಾನೂನು ಸಚಿವರಿಂದ ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಯ ಪುಸ್ತಕ ಬಿಡುಗಡೆ

ಗದುಗಿನ ಯುವ ನ್ಯಾಯವಾದಿ ಎಸ್ ಕೆ ನದಾಫ್ ಅವರು ಬರೆದ ಸಿವಿಲ್ ನ್ಯಾಯಧೀಶರ ಮುಖ್ಯ ಪರೀಕ್ಷೆಗೆ ಸಂಬಂದಿಸಿದ ಪುಸ್ತಕವನ್ನು ಕಾನೂನು ಸಚಿವ ಎಚ್ ಕೆ ಪಾಟೀಲ ಲೋಕಾರ್ಪಣೆಗೊಳಿಸಿದರು. ಕನ್ನಡದಲ್ಲಿ ಕಾನೂನಿನ ಪುಸ್ತಕ ಬರೆದು ನ್ಯಾಯಾಧೀಶರಾಗುವ ಯುವ ವಕೀಲರಿಗೆ, ಎಸ್ ಕೆ ನದಾಫ್ ಅವರು ಉತ್ತಮ ಗ್ರಂಥ ಅರ್ಪಿಸಿದ್ದಾರೆ ಎಂದರು. ನ್ಯಾಯವಾದಿ ಮಿತ್ರರು ತಪಸ್ಸಿನ ರೀತಿಯಲ್ಲಿ ಅಧ್ಯಯನಶೀಲರಾದಾಗ ಗೆಲವು ಸಾಧ್ಯ ಎಂದರು. ಬೆಂಗಳೂರಿನ ಕರ್ನಾಟಕ ಲಾ ರಿಪೋರ್ಟರ್ಸ್ ಪಬ್ಲಿಕೇಶನ್ ಈ ಪುಸ್ತಕವನ್ನು ಹೊರ ತಂದಿದ್ದು, ಎಸ್ ಕೆ ನದಾಫ್ ಅವರು ಅನೇಕ ಕನ್ನಡದಲ್ಲಿ ಕಾನೂನು ಪುಸ್ತಕಗಳನ್ನು ಬರೆದಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಲೇಖಕರಾದ ಎಸ್ ಕೆ ನದಾಫ್, ಎಚ್ ಕೆ ಪಾಟೀಲರ ವಿಶೇಷ ಕರ್ತವ್ಯಾಧಿಕಾರಿ ಲತಿಫ್ ಕುನ್ನಿಭಾವಿ, ಪ್ರಕಾಶಕ ವಿ ತ್ಯಾಗರಾಜ, ನ್ಯಾಯವಾದಿ ಕುಶವಂತಕುಮಾರ, ತುಳಸಿಗೇರಿ ಹಾಗೂ ಬೆಳ್ಳೆಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!