ರಾಜಸ್ಥಾನದಲ್ಲಿ ವಿಧಾನಸಭೆಗೆ ಇಂದು ಚುನಾವಣೆ ನಡೆಯಿತು. ಬೆಳಿಗ್ಗೆಯಿಂದಲೇ ರಾಜ್ಯದಲ್ಲಿ ಸಣ್ಣಪುಟ್ಟ ಘಟನೆ ಹೊರತು ಪಡಿಸಿ, ಮತದಾನ ಬಿರುಸಿನಿಂದ ಕೂಡಿತ್ತು.
ಭಾರತದ ಕಟ್ಟ ಕಡೆಯ ಗ್ರಾಮ, ಅಕಲಿ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಕಲಿ ಗ್ರಾಮದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದ ಗಡಿಗೆ ಹೊಂದುಕೊಂಡಿರುವ ಅಕಲಿ ಗ್ರಾಮದಲ್ಲಿ 550 ಮತದಾರರಿದ್ದು, ಅಲ್ಲಿಯೇ ಮತಕೇಂದ್ರ ಸ್ಥಾಪಿಸಲಾಗಿತ್ತು. ಬಿ ಎಸ್ ಎಫ್ ಯೋಧರ ಸರ್ಫಗಾವಲಿನ ಮಧ್ಯೆ ಶಾಂತಿಯುತ ಮತದಾನ ನಡೆಯಿತು. ಭಾರತದ ಕಟ್ಟ ಕಡೆಯ ಹಳ್ಳಿಯಾದ ಅಕಲಿ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದರು, ಅಲ್ಲಿನ ಜನ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದರು.
Author: Karnataka Files
Post Views: 124





