ನಿನ್ನೇ ದಾವಣಗೆರೆಯಲ್ಲಿ ನಡೆದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಮಾವೇಶವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟೀಕಿಸಿದ್ದಾರೆ.
ಅದು ಲಿಂಗಾಯತ ಮಹಾಸಭಾ ಅಲ್ಲ, ಮೂರು ಕುಟುಂಬಗಳ ಮಹಾಸಭಾ ಎಂದು ಲೇವಡಿ ಮಾಡಿದ್ದಾರೆ. ಶಾಮನೂರು, ಖಂಡ್ರೆ ಹಾಗೂ ಯಡಿಯೂರಪ್ಪನವರ ಕುಟುಂಬಕ್ಕೆ ಸೀಮಿತವಾದ ಮಹಾಸಭಾ ಅದು ಎಂದು ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ 10 ಲಕ್ಷ ಜನ ಸೇರ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು ಆದ್ರೆ ಅಷ್ಟು ಜನ ಬಂದಿಲ್ಲ, ಸಮುದಾಯದವರು ಜಾಗ್ರತರಾಗಿದ್ದಾರೆ ಎಂದರು. ರಾಜ್ಯದಲ್ಲಿ ವೀರಶೈವ ಲಿಂಗಾಯತದ ಅನೇಕ ಉಪ ಪಂಗಡಗಳು ಒಳ ಮೀಸಲಾತಿ ಪಡೆದುಕೊಂಡಿವೆ. ಪಂಚಮಸಾಲಿಗಳಿಗೆ ಮಾತ್ರ ಮೀಸಲಾತಿ ಸಿಗಬೇಕಿದೆ ಎಂದರು.
Author: Karnataka Files
Post Views: 5





