ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ದೆಹಲಿ ನಾಯಕರ ಜೊತೆ ಸುಧೀರ್ಘ ಚರ್ಚೆ ನಡೆದ ಬಳಿಕ ಶೆಟ್ಟರಗೆ ಹಸಿರು ನಿಶಾನೆ ನೀಡಿದೆ ಎನ್ನಲಾಗಿದೆ.
ಶೆಟ್ಟರ ಅವರಿಗೆ ಹೇಗಾದರು ಮಾಡಿ ಟಿಕೇಟ ತಪ್ಪಿಸಬೇಕು ಎಂದು ಒಳಗೊಳಗೆ ಹುನ್ನಾರ ನಡೆಸಿದ್ದ ” ಅ ಸಂತೋಷ ” ಟೀಮಿಗೆ ಹಿನ್ನೆಡೆಯಾಗಿದೆ.
ಬೆಳಗಾವಿ ಸ್ಥಳೀಯ ನಾಯಕರ ವಿರೋದದ ಮಧ್ಯೆ ಶೆಟ್ಟರ ಅವರಿಗೆ ಕಡೆಗೂ ಟಿಕೇಟ್ ನೀಡಿರುವ ಬಿಜೆಪಿ, ಸ್ಥಳೀಯ ನಾಯಕರನ್ನು ಮನವೊಲಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಅಲ್ಲದೆ ಬೆಳಗಾವಿಗೆ ಹೋಗಿ ಸಿದ್ಧತೆ ಮಾಡಿಕೊಳ್ಳುವಂತೆ ಶೆಟ್ಟರಗೆ ಹೇಳಲಾಗಿದೆ.
Author: Karnataka Files
Post Views: 5





