ಕೇಂದ್ರ ಸಚಿವ ಪ್ರಲ್ಲಾದ ಜೋಶಿ ವಿರುದ್ಧ ಸಮರ ಸಾರಿರುವ ಫಕೀರ ದಿಂಗಾಲೇಶ್ವರ ಸಾಮೀಜಿ ನಾಳೆ ಧಾರವಾಡದಲ್ಲಿ ಸಭೆ ಕರೆದಿದ್ದಾರೆ.
ಧಾರವಾಡದ ಜರ್ಮನ್ ಆಸ್ಪತ್ರೆ ಪಕ್ಕ ಇರುವ ಸೇವಾಲಯದಲ್ಲಿ ಸಭೆ ನಡೆಯಲಿದೆ. ಅಅಭ್ಯರ್ಥಿ ಬದಲಿಸುವಂತೆ ಬಿಜೆಪಿ ಹೈಕಮಾಂಡಗೆ ನೀಡಿದ ಗಡುವು ಮುಕ್ತಾಯಗೊಂಡಿದ್ದು, ನಾಳೆ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ನಾಳೆ ಬೆಳಿಗ್ಗೆ 10-30 ಕ್ಕೆ ಕರೆದಿರುವ ಸಭೆಗೆ ಯಾವದೇ ಸ್ವಾಮೀಜಿಗಳನ್ನು ಅಹ್ವಾನಿಸಿಲ್ಲ ಎಂದಿರುವ ದಿಂಗಾಲೇಶ್ವರ ಶ್ರೀಗಳು, ಮಠಾಧೀಶರು ತಮ್ಮ ಸ್ವ ಇಚ್ಛೆಯಿಂದ ಸಭೆಗೆ ಬರಬಹುದು ಎಂದಿದ್ದಾರೆ.
ನಾಳೆ ನಡೆಯುವ ಸಭೆ ಕುತೂಹಲ ಮೂಡಿಸಿದ್ದು, ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
Author: Karnataka Files
Post Views: 5





