Download Our App

Follow us

Home » ರಾಜಕೀಯ » ಬಿಸಿಲಿನ ತಾಪಮಾನ, ಆಮ್ಲಜನಕದ ಕೊರತೆ. ಉಣಕಲ್ ಕೆರೆಯಲ್ಲಿ ಮೀನುಗಳ ಮಾರಣಹೋಮ

ಬಿಸಿಲಿನ ತಾಪಮಾನ, ಆಮ್ಲಜನಕದ ಕೊರತೆ. ಉಣಕಲ್ ಕೆರೆಯಲ್ಲಿ ಮೀನುಗಳ ಮಾರಣಹೋಮ

ಉಣಕಲ್ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ದೊಡ್ಡ ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿವೆ. ಸತ್ತ ಮೀನುಗಳು ದುರ್ನಾತ ಬೀರುತ್ತಿದ್ದುದರಿಂದ ವಾಯು ವಿಹಾರಿಗಳು ಈ ವಿಷಯವನ್ನು ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. 

ಮೀನುಗಳ ದಿಢೀರ್ ಸಾವಿಗೆ ಆಮ್ಲಜನಕದ ಕೊರತೆಯೇ ಕಾರಣವೆಂಬುದು ಮೇಲ್ನೋಟಕ್ಕೆ ತಿಳಿದುಬಂದರು, ಬಿಸಿಲಿನ ಝಳ ಜಾಸ್ತಿಯಾಗಿದ್ದು, ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇದಲ್ಲದೇ ಬಿಸಿಲಿನ ತಾಪಮಾನ ಹೆಚ್ಚಳದಿಂದ ಕೆರೆಯ ತಳಭಾಗದಲ್ಲಿರುವ ಪಾಚಿ ಮೇಲ್ಭಾಗಕ್ಕೆ ಬಂದು ಆಮ್ಲಜನಕವನ್ನು ಹೀರಿ ಕೊಳ್ಳುತ್ತಿದೆ. ಹೀಗಾಗಿ, ಮೀನುಗಳಿಗೆ ಆಮ್ಲಜನಕದ ಅಭಾವ ಉಂಟಾಗಿ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. 

ಅಲ್ಲದೆ ಉಣಕಲ ಕೆರೆಗೆ ಕೊಳಚೆ ನೀರಿನ ಬಂದು ಸೇರಿಕೊಳ್ಳುತ್ತಿರುವದರಿಂದ ನೀರು ಕಲುಷಿತಗೊಳ್ಳುವದರಿಂದ ಸಹ ಮೀನುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇಷ್ಟಾದರು ಸಹ ಪಾಲಿಕೆ ಅಧಿಕಾರಿಗಳು ಕೆರೆಗೆ ಬರದೇ ಇರೋದಕ್ಕೆ, ಬಿಜೆಪಿ ಮುಖಂಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!