Download Our App

Follow us

Home » ಕಾನೂನು » ಕಕ್ಷಿದಾರ ಇದ್ದಲ್ಲೇ ಬಂದು ನ್ಯಾಯ ಕೊಟ್ಟ ನ್ಯಾಯಾಧೀಶರು. ನ್ಯಾಯಾಧೀಶ ಗಿರೀಶ್ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಕಕ್ಷಿದಾರ ಇದ್ದಲ್ಲೇ ಬಂದು ನ್ಯಾಯ ಕೊಟ್ಟ ನ್ಯಾಯಾಧೀಶರು. ನ್ಯಾಯಾಧೀಶ ಗಿರೀಶ್ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

14 ರಂದು ಧಾರವಾಡ ಸಿವಿಲ್ ಕೋರ್ಟ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನ ವೇಳೆ ಅಸಲು ದಾವೆ ಕೇಸೊಂದಕ್ಕೆ ಸಂಬಂಧಿಸಿದಂತೆ 89 ವರ್ಷ ವಯಸ್ಸಿನ ಕಕ್ಷಿದಾರ ಮಹಿಳೆ ಕೋರ್ಟ್ ಒಳಗಡೆ ಬರಲಾರದ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಪರಿಗಣಿಸಿ ನ್ಯಾಯಾಧೀಶರಾದ ಗಿರೀಶ ಆರ್ .ಬಿ. ಅವರು ಕೋರ್ಟ್‌ನಿಂದ ಹೊರಬಂದು ಆ ಮಹಿಳೆ ಇರುವಲ್ಲಿಯೇ ಬಂದು ಆಕೆಯ ಹೇಳಿಕೆಗಳನ್ನು ಪಡೆದು ರಾಜೀ ಸಂಧಾನ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. 

ನ್ಯಾಯಾಧೀಶರ ಈ ಮಾನವೀಯ ಕಳಕಳಿಗೆ ನೆರೆದಿದ್ದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಪ್ರಕರಣದ ವಾದಿ ಪರವಾಗಿ ವಕೀಲರಾದ ಎಸ್.ಎಚ್. ಬಳಗನ್ನವರ ಹಾಗೂ ಪ್ರತಿವಾದಿ ಪರ ವಕೀಲರಾದ ಶಕ್ತಿ ಹಿರೇಮಠ ವಕಾಲತ್ತು ವಹಿಸಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!