Download Our App

Follow us

Home » ಕಾನೂನು » ವಿನಯ ಕುಲಕರ್ಣಿ ಜಾಮೀನು ತೀರ್ಪು ನಾಳೆಗೆ ಮುಂದೂಡಿಕೆ

ವಿನಯ ಕುಲಕರ್ಣಿ ಜಾಮೀನು ತೀರ್ಪು ನಾಳೆಗೆ ಮುಂದೂಡಿಕೆ

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯವರ ಜಾಮೀನು ಅರ್ಜಿಗೆ ಸಂಬಂದಿಸಿದಂತೆ ನಾಳೆ ತೀರ್ಪು ಪ್ರಕಟಗೊಳ್ಳಲಿದೆ.

ಬಹುತೇಕ ಸಾಕ್ಷಿದಾರರ ಪ್ರಕ್ರಿಯೆ ಮುಗಿದಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.  2021ರ ಆಗಸ್ಟ್ 11 ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಅವರು ಷರತ್ತುಬದ್ದ ಜಾಮೀನಿನ ಮೇಲೆ ಹೊರಬಂದಿದ್ದರು.

ಕೊಲೆ ಪ್ರಕರಣದ ಸಾಕ್ಷಿಗಳನ್ನು ಸಂಪರ್ಕಿಸಿ, ಪ್ರಭಾವ ಬೀರಲು ಯತ್ನಿಸುವ ಮೂಲಕ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಕುಲಕರ್ಣಿ ಜಾಮೀನು ರದ್ದು ಪಡಿಸಿತ್ತು. 

ನಾಳೆ ಬೆಳಿಗ್ಗೆ ಜಾಮೀನಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಗೊಳ್ಳಲಿದೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!