ಒಬ್ಬ ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನಕ್ಕೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಪಿಎಸ್ಐ ನಾಸಿರ ಹುಸೇನ್ ನಿಧನಕ್ಕೆ ಉಡುಪಿ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ.
ಕುಂದಾಪುರ ಗ್ರಾಮೀಣ ಠಾಣೆಯ ಪಿ ಎಸ್ ಐ ಆಗಿದ್ದ ನಾಸಿರ ಹುಸೇನ ನಿನ್ನೆಯಷ್ಟೇ ಅಕಾಲಿಕ ನಿಧನ ಹೊಂದಿದ್ದರು. ಪೊಲೀಸ್ ಮ್ಯಾರಥಾನ್ ವೇಳೆ ನಾಸಿರ ಹುಸೇನ್ ಕುಸಿದು ಬಿದ್ದು ಸಾವನ್ನಪ್ಪಿದ್ದರು.
ಜನರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದ ಅವರು ಉಡುಪಿ ಜಿಲ್ಲೆಯಾಧ್ಯಂತ ಹೆಸರು ಮಾಡಿದ್ದರು.
ನಾಸಿರ ಹುಸೇನ ನಿಧನಕ್ಕೆ, ಉಡುಪಿ ಜಿಲ್ಲೆ ಯಾದ್ಯಂತ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ ಗಳಲ್ಲಿ ನಾಸಿರ ಹುಸೇನ್ ಅವರರಿಗೆ ಶೃದ್ದಾಂಜಲಿ ಸಲ್ಲಿಸುವ ಚಿತ್ರ ಅವರ ಜನಪ್ರಿಯತೆಯನ್ನು ಸಾಬೀತು ಮಾಡಿದೆ.
ಕರಾವಳಿ ಭಾಗದಲ್ಲಿ, ಯಾವುದೇ ಭೇದಭಾವಗಳನ್ನು ಮಾಡದೆ, ಒಬ್ಬ ಅಧಿಕಾರಿಗೆ ಇಷ್ಟೊಂದು ಗೌರವ ವ್ಯಕ್ತವಾಗುತ್ತಿರುವುದು ಅವರ ವ್ಯಕ್ತಿತ್ವದ ಮಹತ್ವವನ್ನು ತೋರಿಸುತ್ತದೆ.
Author: Karnataka Files
Post Views: 669





