ಕಳೆದ ಹತ್ತು ದಿನಗಳ ಹಿಂದೆ ಧಾರವಾಡದ ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿ ವ್ಯಕ್ತಿಯೊಬ್ಬನ ಆತ್ಮಹತ್ಯೆಯ ಕೇಸೂಂದು ಸದ್ದು ಮಾಡದೇ ಅವನೊಟ್ಟಿಗೆ ಸತ್ತು ಹೋಯ್ತಾ ಅನ್ನೋ ಅನುಮಾನ ಕಾಡತೊಡಗಿದೆ.
ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿ ದತ್ತಾತ್ರಯ ಎಂಬಾತ ವಿಡಿಯೋ ಮಾಡಿ, ಹೇಳಬೇಕಾಗಿದ್ದನ್ನು ಎಲ್ಲವೂ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದ.
ಈತನ ಮಾಲೀಕತ್ವದಲ್ಲಿ ಇದ್ದ 10 ಕೋಟಿ ಬೆಲೆ ಬಾಳುವ ಆಸ್ತಿ ಆತ ನೇಣು ಹಾಕಿಕೊಳ್ಳಲು ಕಾರಣವಾಯ್ತು ಎಂದು ಆತನ ಜೊತೆ ಸಂಪರ್ಕ ಇರುವ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ವಿದ್ಯಾಗಿರಿ ಠಾಣೆ ಸರಹದ್ದಿನಲ್ಲಿ ನಡೆದಿರುವ ಈ ಪ್ರಕರಣದ ಬಗ್ಗೆ ವಿದ್ಯಾಗಿರಿ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಲ್ಲಿ, ಆತ ಸಾಯುವ ಮುನ್ನ ಹೇಳಿದ ಮಾತು ಸತ್ಯವೂ, ಅಸತ್ತವೋ ತಿಳಿದು ಬರಲಿದೆ.
ಆತ್ಮಹತ್ಯೆ ಮಾಡಿಕೊಂಡ ದತ್ತಾತ್ರಯನನ್ನು ಬಲ್ಲವರು, ಆತ ಸತ್ತು 10 ದಿನಗಳಾದರು ಅದೇ ಚರ್ಚೆಯಲ್ಲಿ ತೊಡಗಿದ್ದು, ಅನೇಕ ವಿಚಾರಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ.
Author: Karnataka Files
Post Views: 28





