ಹುಬ್ಬಳ್ಳಿಯ ಬಿಡನಾಳದ ಮೋಹನ ಬಸಪ್ಪ ನಂದಿಹಳ್ಳಿ ಕುಟುಂಬಕ್ಕೆ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಅನ್ಯಾಯ ಆಗಿದ್ದರ ಕುರಿತು ಸಮಗ್ರ ತನಿಖೆ ನಡೆಸಲು ಸರ್ಕಾರ ಈ ಪ್ರಕರಣವನ್ನು ಸಿ ಐ ಡಿ ಗೆ ವಹಿಸಿದೆ.
ಈ ಹಿನ್ನೆಲೆಯಲ್ಲಿ ನಂದಿಹಳ್ಳಿ ಕುಟುಂಬದ ಪರವಾಗಿ ದ್ವನಿ ಎತ್ತಿದ್ದ ಕಾಂಗ್ರೇಸ್ ಮುಖಂಡ ಗಿರೀಶ ಗದಿಗೆಪ್ಪಗೌಡರಿಗೆ ಸಿ ಐ ಡಿ ನೋಟಿಸ್ ನೀಡಿದೆ.
ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ನಡೆಸುವಂತೆ ತಾವು ದಿನಾಂಕ 25-10-2025 ರಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದು, ನನ್ನನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿದ್ದು, ತಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 03-01-2026 ರಂದು ಸೂಕ್ತ ಧಾಖಲಾತಿಯೊಂದಿಗೆ ಹಾಜರಾಗಬೇಕೆಂದು ಸಿ ಐ ಯು ಸಿ ಐ ಡಿ ಘಟಕದ ಉಪ ಅಧಿಕ್ಷಕ ಸುಲೇಮಾನ ತಹಸೀಲ್ದಾರ ಅವರು ಗಿರೀಶ ಗದಿಗೆಪ್ಪಗೌಡರಿಗೆ ನೋಟೀಸ್ ನೀಡಿದ್ದಾರೆ.
ತಮಗೆ ಬಂದಿರುವ ನೋಟಿಸಿನ ಪ್ರತಿಯನ್ನು ಗಿರೀಶ ಗದಿಗೆಪ್ಪಗೌಡರರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ.
Author: Karnataka Files
Post Views: 475





