Download Our App

Follow us

Home » ಕಾನೂನು » ಹುಬ್ಬಳ್ಳಿ ಬಿಡನಾಳದ ನಂದಿಹಳ್ಳಿ ಜಮೀನು ಖರೀದಿ ಪ್ರಕರಣ : ಗದಿಗೆಪ್ಪಗೌಡರಿಗೆ ಸಿ ಐ ಡಿ ನೋಟಿಸ್

ಹುಬ್ಬಳ್ಳಿ ಬಿಡನಾಳದ ನಂದಿಹಳ್ಳಿ ಜಮೀನು ಖರೀದಿ ಪ್ರಕರಣ : ಗದಿಗೆಪ್ಪಗೌಡರಿಗೆ ಸಿ ಐ ಡಿ ನೋಟಿಸ್

ಹುಬ್ಬಳ್ಳಿಯ ಬಿಡನಾಳದ ಮೋಹನ ಬಸಪ್ಪ ನಂದಿಹಳ್ಳಿ ಕುಟುಂಬಕ್ಕೆ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಅನ್ಯಾಯ ಆಗಿದ್ದರ ಕುರಿತು ಸಮಗ್ರ ತನಿಖೆ ನಡೆಸಲು ಸರ್ಕಾರ ಈ ಪ್ರಕರಣವನ್ನು ಸಿ ಐ ಡಿ ಗೆ ವಹಿಸಿದೆ. 

ಈ ಹಿನ್ನೆಲೆಯಲ್ಲಿ ನಂದಿಹಳ್ಳಿ ಕುಟುಂಬದ ಪರವಾಗಿ ದ್ವನಿ ಎತ್ತಿದ್ದ ಕಾಂಗ್ರೇಸ್ ಮುಖಂಡ ಗಿರೀಶ ಗದಿಗೆಪ್ಪಗೌಡರಿಗೆ ಸಿ ಐ ಡಿ ನೋಟಿಸ್ ನೀಡಿದೆ. 

ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ನಡೆಸುವಂತೆ ತಾವು ದಿನಾಂಕ 25-10-2025 ರಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದು, ನನ್ನನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿದ್ದು, ತಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 03-01-2026 ರಂದು ಸೂಕ್ತ ಧಾಖಲಾತಿಯೊಂದಿಗೆ ಹಾಜರಾಗಬೇಕೆಂದು ಸಿ ಐ ಯು ಸಿ ಐ ಡಿ ಘಟಕದ ಉಪ ಅಧಿಕ್ಷಕ ಸುಲೇಮಾನ ತಹಸೀಲ್ದಾರ ಅವರು ಗಿರೀಶ ಗದಿಗೆಪ್ಪಗೌಡರಿಗೆ ನೋಟೀಸ್ ನೀಡಿದ್ದಾರೆ. 

ತಮಗೆ ಬಂದಿರುವ ನೋಟಿಸಿನ ಪ್ರತಿಯನ್ನು ಗಿರೀಶ ಗದಿಗೆಪ್ಪಗೌಡರರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!