ಯಲ್ಲಾಪುರ ಬಳಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಲಾರಿ ಮತ್ತು ಕ್ರುಸರ್ ವಾಹನ ನಡುವೆ ಡಿಕ್ಕಿ ಸಂಭವಿಸಿ, ಸ್ಥಳದಲ್ಲೆ ಆರು ಜನ ಸಾವನ್ನಪ್ಪಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿ ಬೈಲ್ ಘಟ್ಟದಲ್ಲಿ ಈ ದುರ್ಘಟನೆ ನಡೆದಿದೆ.
ಮೃತರು ಧಾರವಾಡ ಮೂಲದವರು ಎನ್ನಲಾಗಿದೆ. ಮೃತರನ್ನು ಸಂಜೀವ, ಬಸವರಾಜ, ಅಭಿಷೇಕ, ಈಶ್ವರ, ಅಭಿಷೇಷ, ಅಕ್ಷಯ ಎಂದು ಗುರುತಿಸಲಾಗಿದೆ.
ಕ್ರೂಸರ್ ವಾಹನದಲ್ಲಿ ಒಟ್ಟು ಒಂಬತ್ತು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಈ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಧಾರವಾಡದಿಂದ ಅಂಕೋಲಾ ಕಡೆ ಕ್ರುಸರ್ ವಾಹನ ಹೊರಟಿತ್ತು ಎನ್ನಲಾಗಿದೆ.
Author: Karnataka Files
Post Views: 1,247





