ಲಕ್ಷಾಂತರ ಜನರ ಪ್ರಾರ್ಥನೆ, ಹರಕೆ, ಹಾರೈಕೆ, ಪೂಜೆ, ಪುನಸ್ಕಾರಗಳು ಫಲ ಕೊಟ್ಟಿವೆ.
ಅಭಿಮಾನಿಗಳ, ಸ್ನೇಹಿತರ, ಕಾರ್ಯಕರ್ತರಿಗೆ ಖುದ್ದಾಗಿ, ನಗುಮುಖದ ಸೇವೆ ನೀಡುವ ಭಾಗ್ಯ ವಿನಯ ಕುಲಕರ್ಣಿಯವರ ಪಾಲಿಗೆ ಬಂದಿದೆ.
ದೂರವಾಗಿದ್ದ ಧಾರವಾಡ, ನಾಳೆಯಿಂದ ಹತ್ತಿರವಾಗಲಿದೆ. ನಾಳೆ ಶುಕ್ರವಾರ ಶುಭ ಮುಹೂರ್ತದಲ್ಲಿ ವಿನಯ ಕುಲಕರ್ಣಿಯವರು ಧಾರವಾಡಕ್ಕೆ ಬರಲಿದ್ದಾರೆ.
ಬೆಳಿಗ್ಗೆ ಯಲ್ಲಮ್ಮ ದೇವಿಯ ದರ್ಶನ ಪಡೆದ ಬಳಿಕ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರು ಮುರುಘಾಮಠಕ್ಕೆ ಆಗಮಿಸಲಿದ್ದಾರೆ.
ಬಳಿಕ ಅಲ್ಲಿಂದ ಹುಬ್ಬಳ್ಳಿಯ ಸಿದ್ದಾರೋಡ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ನೇರವಾಗಿ ಸಯ್ಯದ್ ಫತೆಶಾವಲಿ ದರ್ಗಾಗೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.
Author: Karnataka Files
Post Views: 734





