ಇನ್ಸ್ಟಾಗ್ರಾಮ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಪೋಸ್ಟ್ ಮಾಡಿದ್ದ ಹುಬ್ಬಳ್ಳಿಯ ಈಶ್ವರ ನಗರದ ಗಂಗಾಧರ ಮಡಿವಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ.
ಈತನ ವಿರುದ್ಧ ಕಸಬಾ ಪೇಠ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ಧಾಖಲು ಮಾಡಲಾಗಿದೆ.
ಕೈಯಲ್ಲಿ ಕತ್ತಿ ಹಿಡಿದುಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದ ಆರೋಪ ಹೊರಿಸಿ ಪ್ರಕರಣ ಧಾಖಲು ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ರಿಯಲ್ ಪೊಲೀಸಿಂಗ್ ಈಗ ಆರಂಭವಾಗಿದೆ. ಭೂಷಣ ಬೊರಸೆ ಅವರು ಪೊಲೀಸ್ ಆಯುಕ್ತರಾಗಿ ಬಂದ ನಂತರ, ಪೊಲೀಸಿಂಗ್ ಚುರುಕಾಗಿದೆ.
Author: Karnataka Files
Post Views: 97




