ಕನ್ನಡಪರ ಹೋರಾಟಗಾರರಾಗಿದ್ದ ಹುಬ್ಬಳ್ಳಿಯ ಅಮೃತ್ ಇಜಾರಿ ಅಕಾಲಿಕ ನಿಧನ ಹೊಂದಿದ್ದಾರೆ.

ಕನ್ನಡ ನಾಡು, ನುಡಿ, ನೆಲ ಜಲದ ವಿಷಯ ಬಂದಾಗ ಹುಬ್ಬಳ್ಳಿಯ ನೆಲದಲ್ಲಿ ನಿಂತು ಅಬ್ಬರಿಸುತ್ತಿದ್ದ ದ್ವನಿಯೊಂದು ಅಡಗಿದಂತಾಗಿದೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಡೆಯುತ್ತಿದ್ದ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಅಮೃತ್ ಇಜಾರಿ ದೊಡ್ಡ ಹೆಸರು ಮಾಡಿದ್ದರು.

ಅಮೃತ್ ಇಜಾರಿಯವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಾಳೆ ಮುಂಜಾನೆ 11 ಘಂಟೆಗೆ ಹುಬ್ಬಳ್ಳಿಯ ಅವರ ಸ್ವಗ್ರಹದಿಂದ ಹೊರಡಲಿದ್ದು, ಕೇಶವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಸಧ್ಯ ಪಾರ್ಥಿವ ಶರೀರವನ್ನು ರಮೇಶ ಭವನ ಹತ್ತಿರ ಇರುವ ಭುವನೇಶ್ವರಿ ನಗರದ ಸ್ವಗ್ರಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
Author: Karnataka Files
Post Views: 765




