ಆಂದ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿ ಐ ಡಿ ತನಿಖೆ ನಡೆಸಿತ್ತು. ಚಂದ್ರಬಾಬು ನಾಯ್ಡುರನ್ನು ಹಗರಣದ ಎ 1 ಆರೋಪಿಯನ್ನಾಗಿ ಮಾಡಲಾಗಿದ್ದು, ಬೆಳಗಿನ ಜಾವ 3 ಘಂಟೆಗೆ ಅವರನ್ನು ಬಂಧಿಸಲು ಹೋಗಿದ್ದ ಪೋಲಿಸರಿಗೆ ಎಸ್ ಪಿ ಜೆ ಕಮಾಂಡೋಗಳು ಅವಕಾಶ ನೀಡಿರಲಿಲ್ಲ. ಬೆಳಿಗ್ಗೆ 6 ಘಂಟೆಗೆ ನಾಯ್ಡುರನ್ನು ಬಂಧಿಸಲಾಗಿದ್ದು, ಪೋಲಿಸರು ಅವರನ್ನು ವಿಜಯವಾಡಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಳೆದ ವಾರ ಬಳ್ಳಾರಿಗೆ ಬಂದಿದ್ದ ಚಂದ್ರಬಾಬು ನಾಯ್ಡು,, ಎನ್ಟಿಆರ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

Author: Karnataka Files
Post Views: 12





