ರಾಜ್ಯ ಕಾಂಗ್ರೇಸ್ ಸರ್ಕಾರದ ಖಡಕ್ ಸಚಿವ ಡಾ, ಎಚ್ ಸಿ ಮಹದೇವಪ್ಪನವರು, ಧಾರವಾಡದಲ್ಲಿ ತಮ್ಮ ಅಂಗರಕ್ಷಕರಿಂದ ಶೂ ಹಾಕಿಸಿಕೊಂಡರು. ನಿನ್ನೆಯಿಂದ ಧಾರವಾಡ ಜಿಲ್ಲೆಯ ಪ್ರವಾಸದಲ್ಲಿರುವ ಸಚಿವ ಮಹದೇವಪ್ಪ ಇಂದು ತಮ್ಮದೇ ಇಲಾಖೆಯ ವಿಧ್ಯಾರ್ಥಿನಿಲಯದ ಸ್ಥಿತಿಗತಿ ತಿಳಿಯಲು ಭೇಟಿ ಕೊಟ್ಟಿದ್ದರು. ಹಾಸ್ಟೇಲ್ ಶುಚಿತ್ವ ಇಟ್ಟುಕೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ಮಹದೇವಪ್ಪ ಹೊರಟು ನಿಂತರು. ಇನ್ನೇನು ಶೂ ಧರಿಸಬೇಕು ಅನ್ನುವಷ್ಟರಲ್ಲಿ, ಅದನ್ನು ಗಮನಿಸಿದ ಅವರ ಅಂಗರಕ್ಷಕ ಸಚಿವರಿಗೆ ಶೂ ಹಾಕಿದ ಘಟನೆ ನಡೆಯಿತು.
Author: Karnataka Files
Post Views: 5





